ಇಷ್ಟವಾಯಿತೇ? ಮೆಚ್ಚುಗೆ ಸೂಚಿಸಿ
ಪ್ರೀತಿ ಹುಟ್ಟಿತೇ? ಅದನ್ನು ವ್ಯಕ್ತ ಪಡಿಸಿ
ಕೋಪ ಉಕ್ಕೀತೆ ? ಕೊಂಚ ತಾಳ್ಮೆ ವಹಿಸಿ
ಕನಸು ಹುಟ್ಟಿತೇ? ಅದನ್ನು ಗುರಿಯಾಗಿಸಿ
ಅವಕಾಶ ತಪ್ಪಿತೇ ? ಅವಸರಿಸದೆ ಸ್ವಲ್ಪ ನಿಧಾನಿಸಿ
ಸಮಸ್ಯೆ ಎದುರಾಯಿತೇ? ಹಿಂಜರಿಯದೆ ಎದುರಿಸಿ
ಸೋಲಾಯಿತೇ? ಪ್ರಯತ್ನ ಮುಂದುವರಿಸಿ
ಗೆಲುವಾಯಿತೇ? ನಿಲ್ಲದೆ ಮುಂದೆ ಚಲಿಸಿ
ದುಃಖವಾಯಿತೇ ? ಸಾಂತ್ವನ ಪಡಿಸಿ
ಸಂತೋಷವಾಯಿತೇ? ಆ ಕ್ಷಣವನ್ನು ಅನುಭವಿಸಿ
ದ್ವಂದ್ವ ಹುಟ್ಟಿತೇ ? ಆಲೋಚಿಸಿ
ದಾರಿ ಮುಚ್ಚಿತೇ ? ಹಿರಿಯರೊಡನೆ ಸಮಾಲೋಚಿಸಿ
ಜವಾಬ್ಧಾರಿ ಹೆಚ್ಚಿತೇ? ಸಂಭಾಳಿಸಿ ಮತ್ತು ನಿಭಾಯಿಸಿ
ಅಸೂಯೆ ಹುಟ್ಟಿತೇ? ಕೂಡಲೇ ಸಾಯಿಸಿ
ಅನುಮಾನ ಹುಟ್ಟಿತೇ? ಕಲ್ಪನೆ ಮಾಡುವುದನ್ನು ನಿಲ್ಲಿಸಿ
– ಶ್ರೀನಾಥ್ ಹರದೂರ ಚಿದಂಬರ