ಮಾತೃ ಭಾಷೆಗೆ ಇರಬೇಕು ಯಾವಾಗಲೂ ಪ್ರಾಮುಖ್ಯತೆ ,
ಬೇರೆ ಭಾಷೆ ಕಲಿಬೇಕು ಇದ್ದರೆ ಅವಶ್ಯಕತೆ
ನಿಮಗೆ ಗೊತ್ತೇ ಹಿಂದಿ ಹೇರುವ ಹಿಂದಿರುವ ಅಸಲಿಕಥೆ
ಬಿಟ್ಟಿಹೋಗಿಲ್ಲವೇ ಬ್ರಿಟಿಷರು ಒಡೆದು ಆಳುವ ಅನೈತಿಕತೆ
ಜಾತಿ ಧರ್ಮದ ನಂತರ ಶುರುವಾಗಿದೆ ಈಗ ಭಾಷೆಯ ರಾಜಕೀಯತೆ
ಬೆಳೆಸಿಕೊಂಡರೆ ನಮ್ಮಲ್ಲಿ ಸ್ವಲ್ಪ ವೈಚಾರಿಕತೆ ಹಾಗು ಹೃದಯ ವೈಶಾಲ್ಯತೆ
ಎಂದೆಂದಿಗೂ ಉಳಿಸಿಕೊಳ್ಳಬಹುದು ಮಾತೃಭಾಷೆಯ ಪಾವಿತ್ರ್ಯತೆ.
– ಶ್ರೀನಾಥ್ ಹರದೂರ ಚಿದಂಬರ
👌👌
LikeLike
Thank you…
LikeLike